ಲಕ್ಷ್ಮೇಶ್ವರ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶ್ರೀರಾಮಸೇನೆ ವತಿಯಿಂದ ಪಿಎಸ್ ಐ ಈರಪ್ಪ ರಿತ್ತಿ ಅಮಾನತ್ತಿಗಾಗಿ ಆಗ್ರಹಿಸಿ ಪ್ರತಿಬಂಧಕಾಜ್ಞೆ ನಡುವೆಯೂ ಪ್ರತಿಭಟನೆ ನಡೆದಿದ್ದೂ,ಪ್ರತಿಭಟನೆಯಲ್ಲಿ ಪಿಎಸ್ ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲು ಮುಂದಾದ ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನವರ ಸೇರಿ 33 ಜನರನ್ನ ವಶಕ್ಕೆ ಪಡೆದಿದ್ದಾರೆ.
ಈ ಬೆನ್ನಲ್ಲೇ ಲಕ್ಷ್ಮೇಶ್ವರ ಪಟ್ಟಣದ ಕೆಲ ಸ್ಥಳೀಯರು ಪಿಎಸ್ ಐ ವಿರುದ್ಧ ಪ್ರತಿಭಟನೆ ನಡೆಸಿದ ಶ್ರೀರಾಮಸೇನಾ ಮುಖಂಡ ರಾಜು ಖಾನಪ್ಪನವರಿಗೂ ಧಿಕ್ಕಾರ ಅಂತಾ ಘೋಷಣೆ ಕೂಗಿದ್ದಾರೆ.
ಒಟ್ಟಾರೆ ಪ್ರತಿಬಂಧಕಾಜ್ಞೆ ಜಾರಿಯ ನಡುವೆ ಪಿಎಸ್ ಐ ಈರಪ್ಪ ರಿತ್ತಿಯವರ ಕುರಿತು ಪರ ಹಾಗೂ ವಿರೋಧದ ಘೋಷಣೆಗಳು ಕೇಳಿ ಬಂದಿದ್ದು, ಪ್ರತಿಭಟನೆ ಮಾಡಿದವರನ್ನು ಪೊಲೀಸರು ಟೆಂಪೋದಲ್ಲಿ ಕರೆದೊಯ್ದಿದ್ದಾರೆ.
ರೈಸ್ ಆಫ್ ನ್ಯೂಸ್ ಲಕ್ಷ್ಮೇಶ್ವರ

More Stories
ರೈತರಿಗೆ ಸಮರ್ಪಕ ಗೊಬ್ಬರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ – ಬೊಮ್ಮಾಯಿ
ಅರ್ಧಗಂಟೆ ಮಳೆ ಕುಸಿದು ಬಿತ್ತು ಛಾವಣಿ
ಸೀರೆಯಲ್ಲಿ ‘ಆಪರೇಷನ್ ಸಿಂಧೂರ’ ಶೌರ್ಯ ನೇಯ್ದ ಗದಗಿನ ನೇಕಾರ