ಕೊಪ್ಪಳ ಕೊಪ್ಪಳ :- ಹಿಂದುಳಿದ ಶೋಷಿತರ ವರ್ಗಗಳಲ್ಲಿ ಬೀಡು ಬಿಟ್ಟಿರುವ ನೋವುಗಳು ಇನ್ನೂ ನಿವಾರಣೆಯಾಗಿಲ್ಲ. ಆದ್ದರಿಂದ ರಾಜ್ಯದಲ್ಲಿ ಹಲವಾರು ಹೋರಾಟಗಾರರು ಮತ್ತು ದಲಿತ ಸಂಘರ್ಷ ಸಮಿತಿಯ ವಿವಿಧ ಆಯಾಮಗಳ ಮೂಲಕ ಶಿಬಿರ ಏರ್ಪಡಿಸಲಾಗಿದೆ, ಎಂದು ಮಾನವ ಬಂದತ್ವ ವೇದಿಕೆ ರಾಜ್ಯ ಸಂಚಾಲಕ ರಾಮಚಂದ್ರಪ್ಪ ಹೇಳಿದರು. ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದ ಬುದ್ಧ ವಿಹಾರದಲ್ಲಿ ಶನಿವಾರ ರಾಜ್ಯ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಹಾಗೂ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಏರ್ಪಡಿಸಿದ ವಿದ್ಯಾರ್ಥಿಗಳ ಯುವಜನರ ಅಧ್ಯಯನ ಶಿಬಿರದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಹಿಂದುಳಿದ ಎಲ್ಲಾ ಜನಾಂಗಗಳ ಯುವ ಜನತೆಗೆ ಶಿಕ್ಷಣಕ್ಕೆ ಪೂರಕವಾಗಿ ಉದ್ಯೋಗ ಪಡೆಯಲು ಬೇಕಾಗುವ ತರಬೇತಿ ಮಾರ್ಗದರ್ಶನವನ್ನು ಬುದ್ಧ ವಿಹಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ . ಇದರಿಂದ ಹಲವಾರು ವಿದ್ಯಾವಂತರಿಗೆ ಅನುಕೂಲವಾಗಲಿದ್ದು ಪ್ರತಿಯೊಬ್ಬರು ಇಂಥ ಶಿಬಿರದಲ್ಲಿ ಭಾಗವಹಿಸಿ ಯುವ ಪೀಳಿಗೆಗೆ ಅವಶ್ಯಕೆತೆ ಜ್ಞಾನ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್. ಬಿ.ಕೆ. ರವಿರವರು ಮಾತನಾಡಿ ” ಡಾ. ಬಿ.ಆರ್. ಅಂಬೇಡ್ಕರ್ ಅವರ ಜ್ಞಾನ , ಬಸವಣ್ಣನವರ ಕಾಯಕ , ಬುದ್ಧನ ಶಾಂತಿ ಮಂತ್ರಗಳನ್ನು ನಾವು ಅಳವಡಿಸಿಕೊಳ್ಳಬೇಕು, ಸಾಮಾಜಿಕ ನ್ಯಾಯಕ್ಕಾಗಿ ಹಿಂದುಳಿದ ವರ್ಗಗಳ ಹೋರಾಟಗಾರರು ತಮ್ಮ ಜೀವನದ ದಿನಗಳನ್ನು ಕಳೆದಿದ್ದಾರೆ .ಯುವ ಪೀಳಿಗೆ ನಮ್ಮ ಹಕ್ಕು ಪಡೆಯಲು ಹಿಂದುಳಿದ ಜನರ ಏಳಿಗೆಗಾಗಿ ಶ್ರಮಿಸುವ ಕಾರ್ಯ ಮಾಡಬೇಕು” ಎಂದರು .ಜಾತಿ ಉಗಮ ಮತ್ತು ಭಾರತೀಯ ಸಂಸ್ಕೃತಿ ಕುರಿತು ಲಕ್ಷ್ಮಿಪತಿ ಕೋಲಾರ್ ಅವರು ಉಪನ್ಯಾಸವನ್ನು ನೀಡಿದರು. ರಾಜ್ಯ ಸಂಯೋಜಕರಾದ ಎಚ್ ಎನ್ ಅಣ್ಣಯ್ಯ ಸಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು , ಸಂವಾದ ಪತ್ರಿಕೆ ಸಂಪಾದಕರು ಹಾಗೂ ಹಿರಿಯ ಸಾಹಿತಿಗಳಾದ ಇಂದೂಧರ್ ಹೊನ್ನಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು, ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಯೋಜಕ ಸಂಸ್ಥಾಪಕರಾದ ವಿ.ನಾಗರಾಜ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬುದ್ಧ ವಂದನೆಯನ್ನು ಬೌದ್ಧ ಬಿಕ್ಕು ಹನುಮಂತಪ್ಪಬಂತೆಜೀ ಬೋಧಿಸಿದರು , ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ ರಾಜ್ಯದ ಶಿರಾಡಿ ಘಾಟ್ ಹಾಗೂ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮೆಪ್ಪೋಡಿಯ ಗುಡ್ಡ ಕುಷಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿಬಿರದ ಕಾರ್ಯಗಾರದಲ್ಲಿ ಶ್ರೀನಿವಾಸ್ ಮಿನಿ ಗದ್ದಾರ, ಗೋಪಿ ಅವನಿ ,ಗಾನ ಅಶ್ವಥ ರವರ ತಂಡದಿಂದ ಸಾಂಸ್ಕೃತಿಕ ತರಬೇತಿ ನೀಡಲಾಯಿತು. ಶಿಬಿರದ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಯೋಜಕರಾದ ಮಾವಳ್ಳಿ ಶಂಕರ್ , ಪ್ರಗತಿಪರ ಚಿಂತಕಿ- ಮಹಿಳಾ ಹೋರಾಟಗಾರ್ತಿ -ಲೇಖಕಿ ಶಿಬಿರದ ಸಮನ್ವಯ ಸಾವಿತ್ರಿ ಮುಜುಮದಾರ , ರಾಜ್ಯ ಸಹ ಸಂಯೋಜಕರಾದ ಮುನಿರಾಜು, ಬೆಂಗಳೂರು ಗ್ರಾಮಾಂತರ. ಜಿಲ್ಲಾ ಸಂಯೋಜಕ ರಮೇಶ್, ರಾಜ್ಯ ಸಂಘಟನಾ ಸಾಯೋಜಕರಾದ ರಾಮಣ್ಣ ಬೋರಗಿ , ದೇವಪ್ಪ ದೇವರಮನೆ , ಕೊಪ್ಪಳ ಜಿಲ್ಲಾ ಸಯೋಜಕ ಮುದುಕಪ್ಪ ಹೊಸಮನಿ( ನರೇಗಲ್ ) , ಉದ್ಯೋಗ ಖಾತ್ರಿ ಮತ್ತು ಕಾರ್ಮಿಕ ಒಕ್ಕೂಟದ ಜಿಲ್ಲಾ ಸಂಯೋಜಕ ಕೆ.ಅಡಿವೆಪ್ಪ ,ಜಿಲ್ಲಾ ಸಂಘಟನಾ ಸಂಚಾಲಕರಾದ ಕಂಟೆಪ್ಪ , ಆನಂದ , ಜಿಲ್ಲಾ ಮಹಿಳಾ ಸಂಯೋಜಕೀ ದೇವಮ್ಮ ಕನಕಗಿರಿ (ಹುಲಿ ಹೈದರ ) , ಸಂಘಟಕ ಹಾಗೂ ವರದಿಗಾರ ಭೀಮಣ್ಣ ಅವಳಿ , ಕೊಪ್ಪಳ .ತಾಲುಕು. ಸಂಯೋಜಕ ರಮೇಶ್ .ಎಂ ಗುಡ್ಲಾನೂರ್ , ಗಂಗಾವತಿ ತಾಲೂಕು ಸಂಯೋಜಕ ನಾಗರಾಜ್ ಸಂಗಾಪುರ , ಕಾರಟಗಿ ತಾಲೂಕು ಸಂಯೋಜಕ ರಾಜು ಗುಂಡೂರ್ (ವಕೀಲರು) , ಶಿಬಿರದಲ್ಲಿ ಚಿಂತಕರು , ಆಯೋಜಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
More Stories
ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ: ಎರಡು ದಿನ ಶಾಲೆಗಳು ರಜೆ
ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಕೆ ವಿರೋಧಿಸಿ ಪ್ರತಿಭಟನೆ
ಕಾರ್ಮಿಕ ಕಲ್ಯಾಣ ರಥಕ್ಕೆ ಡಿಸಿ ಗೋವಿಂದರೆಡ್ಡಿ, ಸಿಇಒ ಭರತ್ ಚಾಲನೆ